ಸರ್ ಅಹ್ಮದ್ ಸಲ್ಮಾನ ರಶ್ದಿ , (ಜನನ: ೧೯ ಜೂನ್ ೧೯೪೭) ಇವರು ಕಾದಂಬರಿ ಹಾಗೂ ಪ್ರಬಂಧ ಬರೆಯುವ ಭಾರತೀಯ ಸಂಜಾತ ಬ್ರಿಟಿಷ್‌ ಲೇಖಕರಾಗಿದ್ದಾರೆ. ೧೯೮೧ರಲ್ಲಿ ಇವರ ಎರಡನೆಯ ಕಾದಂಬರಿ ಮಿಡ್‌ನೈಟ್ಸ್‌ ಚಿಲ್ಡ್ರನ್‌ (೧೯೮೧) ಬೂಕರ್‌ ಪ್ರಶಸ್ತಿ ಪಡೆದ ನಂತರ ಇವರಿಗೆ ಪ್ರಸಿದ್ಧಿ ಹಾಗೂ ಮನ್ನಣೆ ದೊರಕಿತು. == ಪರಿಚಯ == ಅವರ ಕೆಲವು ಕೃತಿಗಳು ಭಾರತ ಉಪಖಂಡದಲ್ಲಿ ನಡೆವ ಘಟನೆಯನ್ನಾದರಿಸಿವೆ. ಅವರ ಶೈಲಿಯನ್ನು ಹೆಚ್ಚಾಗಿ ಐತಿಹಾಸಿಕ ಕಲ್ಪನೆಗಳಿಂದ ಕಾಲ್ಪನಿಕ ವಾಸ್ತವವಾದದಿಂದ ಕೂಡಿದವು ಎಂದು ವರ್ಗೀಕರಿಸಲಾಗುತ್ತದೆ. ಇವರ ಕೃತಿಗಳು ಮುಖ್ಯ ಅಂಶವು ಹೆಚ್ಚಾಗಿ ಹಲವಾರು ಕಥೆಗಳು, ಉಪಕಥೆಗಳು, ಪೂರ್ವ ಮತ್ತು ಪಶ್ಚಿಮ ಜಗತ್ತಿನ ಕಡೆಗೆ ವಲಸೆ ಹೋಗುವ ವಿಷಯಗಳನ್ನು ಆಧರಿಸಿರುತ್ತದೆ. ಅವರ ನಾಲ್ಕನೆಯ ಕಾದಂಬರಿ ದಿ ಸಟಾನಿಕ್ ವರ್ಸಸ್ (೧೯೮೮), ದ ಸಟಾನಿಕ್ ವರ್ಸಸ್ ವಿವಾದದವನ್ನು ಹುಟ್ಟುಹಾಕಿತು. ಈ ಕಾದಂಬರಿಯು ಹಲವಾರು ದೇಶಗಳ ಮುಸ್ಲಿಮ್‌ರಿಂದ ತೀವೃ ಪ್ರತಿಭಟನೆಗೆ ಒಳಗಾಯಿತು. ಕೆಲವು ಪ್ರತಿಭಟನೆಗಳು ಹಿಂಸಾತ್ಮಕ ರೂಪವನ್ನು ತಳೆದಿದ್ದವು ಮತ್ತು ಕೆಲವರಿಂದ ರಶ್ದಿಯವರು ಪ್ರಾಣ ಬೆದರಿಕೆಯನ್ನೂ ಸಹ ಎದುರಿಸಬೇಕಾಯಿತು. ಫೆಬ್ರುವರಿ ೧೯೮೯ರಲ್ಲಿ ಇರಾನಿನ ಉಛ್ಚ ನಾಯಕ ಆಯತುಲ್ಲಾ ರುಹೊಲ್ಲಾ ಖೋಮೈನಿಯವರು ರಶ್ದಿಯವರ ವಿರುದ್ಧ ಫತ್ವಾ ಹೊರಡಿಸಿದರು.ಅವರನ್ನು ರಾಣಿ ಎಲಿಜಬೆತ್‌ IIರವರು ಜೂನ್ ೨೦೦೭ರಲ್ಲಿ ಇವರ "ಸಾಹಿತ್ಯದ ಸೇವೆಗೆ" ನೈಟ್ ಬ್ಯಾಚಲರ್ ಎಂದು ಗೌರವಿಸಿದರು. ಅವರು ಫ್ರಾಂನ್ಸ್‌ನ ಆಡ್ರ್‌ ಡಿಸ್ ಆರ್ಟ್ಸ್ ಎಟ್ ಡಿಸ್ ಲೆಟರ್ಸ್‌‌ನಲ್ಲಿ ಕಮಾಂಡರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ಐದು ವರ್ಷಗಳ ಅವಧಿಯ ಒಪ್ಪಂದದ ಮೇರೆಗೆ ಎಮೊರಿ ವಿಶ್ವವಿದ್ಯಾಲಯದಲ್ಲಿ ವಾಸವಿರುವ ಮಹೋನ್ನತ ಬರಹಗಾರ ಎಂದು ನೇಮಿಸಲ್ಪರು. ಮೇ ೨೦೦೮ರಲ್ಲಿ ಇವರನ್ನು ಅಮೇರಿಕನ್ ಅಕಾಡೆಮಿ ಆಪ್‌ ಆರ್ಟ್ಸ್ ಆ‍ಯ್‌೦ಡ್‌‍ ಲೆಟ್ಟರ್ಸ್‌ಗೆ ಆಯ್ಕೆ ಮಾಡಲಾಯಿತು. * ೨೦೦೮ರಲ್ಲಿ ದಿ ಟೈಮ್ಸ್ ಪ್ರಕಟಿಸಿದ "೧೯೪೫ರಿಂದ ಇಲ್ಲಿಯವರೆಗಿನ ೫೦ ಶ್ರೇಷ್ಠ ಬ್ರಿಟಿಷ್ ಬರಹಗಾರರು" ಎಂಬ ಪಟ್ಟಿಯಲ್ಲಿ ರಶ್ದಿಯವರಿಗೆ ಹದಿಮೂರನೇಯ ಸ್ಥಾನವನ್ನು ನೀಡಿದೆ. ಅವರ ಇತ್ತೀಚಿನ ಕಾದಂಬರಿ ದಿ ಎನ್‌ಚಾಂಟರ್ಸ್‌ ಆಫ್‌ ಫ್ಲೋರೆನ್ಸ್ ಜೂನ್ ೨೦೦೮ರಲ್ಲಿ ಪ್ರಕಾಶಿತವಾಯಿತು. == ವೈಯಕ್ತಿಕ ಜೀವನ == ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಮೊದಲು ವಕೀಲರಾಗಿದ್ದು ನಂತರ ವ್ಯಾಪಾರಸ್ತರಾದ ಅನೀಸ್ ಅಹಮ್ಮದ್‌ ರಶ್ದಿ ಹಾಗೂ ಶಿಕ್ಷಕಿಯಾದ ನೆಗಿನ್ ಭಟ್‌‍ ಅವರ ಏಕಮಾತ್ರ ಪುತ್ರನಾಗಿ ಸಲ್ಮಾನ್‌ ರಶ್ದಿ ಅವರು ಭಾರತದ ಬಾಂಬೆಯಲ್ಲಿ (ಈಗ ’ಮುಂಬಯಿ’ ಎಂದು ಪರಿಚಿತ) ಜನಿಸಿದರು. ಇವರು ಮುಂಬಯಿನ ಕೆಥೆಡ್ರಲ್ ಹಾಗೂ ಜಾನ್‌ ಕೊನನ್ ಸ್ಕೂಲ್‌ನಲ್ಲಿ ಮೊದಲ ಶಿಕ್ಷಣವನ್ನು ಪೂರೈಸಿದರು. ನಂತರ ಕೆಂಬ್ರಿಡ್ಜ್‌ನ ರಗ್‌ಬಿ ಸ್ಕೂಲ್‌ ಹಾಗೂ ಕಿಂಗ್ಸ್ ಕಾಲೇಜ್‌‌ನಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. ಅವರು ಬರವಣಿಗೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮುನ್ನ ಎರಡು ಜಾಹಿರಾತು ಸಂಸ್ಥೆಗಳಲ್ಲಿ (ಒಗಿಲ್ವಿ ಆ‍ಯ್‌೦ಡ್‌ ಮ್ಯಾಥರ್ ಮತ್ತು ಐಯರ್ ಬಾರ್ಕರ್) ಕಾರ್ಯ ನಿರ್ವಹಿಸುತ್ತಿದ್ದರು. ರಶ್ದಿ ಅವರು ನಾಲ್ಕು ಬಾರಿ ವಿವಾಹವಾಗಿದ್ದಾರೆ. ೧೯೭೬ರಿಂದ ೧೯೮೭ವರೆಗೆ ಅವರ ಮೊದಲನೆಯ ಪತ್ನಿ ಕ್ಲಾರಿಸ್ಸಾ ಲಾರ್ಡ್ ಜೊತೆಗಿದ್ದರು ಮತ್ತು ಒಬ್ಬ ಮಗ ಜಫರ್ ಕೂಡ ಇವರಿದ್ದನು. ಅವರ ಎರಡನೆಯ ಪತ್ನಿ ಅಮೇರಿಕಾದ ಕಾದಂಬರಿಕಾರ್ತಿ ಮೆರಿಯನ್‌ ವಿಗ್ಗಿನ್ಸ್‌ ಆಗಿದ್ದರು. ೧೯೮೮ರಲ್ಲಿ ಇವರನ್ನು ವಿವಾಹಾವಾಗಿ ರಶ್ದಿ ಅವರು ೧೯೯೩ರಲ್ಲಿ ಇವರಿಂದ ವಿಚ್ಛೇದನ ಹೊಂದಿದರು. ಅವರ ಮೂರನೆಯ ಪತ್ನಿ ಎಲಿಜಬೆತ್‌ ವೆಸ್ಟ್ ಆಗಿದ್ದು ಇವರ ಪುತ್ರ ಮಿಲನ್ ಆಗಿದ್ದನು. ಇವರ ಜೊತೆ ೧೯೯೭ರಿಂದ ೨೦೦೪ರವರೆಗೆ ಸಂಸಾರವನ್ನು ನಡೆಸಿದರು. ೨೦೦೪ರಲ್ಲಿ ಅವರು ಭಾರತೀಯ ಸಂಜಾತೆ ಅಮೇರಿಕಾದ ನಟಿ ಹಾಗೂ ಸೂಪರ್ ಮಾಡೆಲ್‌ ಪದ್ಮ ಲಕ್ಷ್ಮಿ ಅವರನ್ನು ಮದುವೆಯಾದರು. ಇವರು ಅಮೇರಿಕಾದ ರಿಯಾಲಿಟಿ-ಟೆಲಿವಿಷನ್‌ನ ಕಾರ್ಯಕ್ರಮವಾದ ಟಾಪ್ ಚೆಫ್‌‌ ನ ನಿರೂಪಕಿಯಾಗಿದ್ದರು. ೨ ಜುಲೈ ೨೦೦೭ರಲ್ಲಿ ಈ ಮದುವೆ ಕೂಡ ಕೊನೆಗೊಂಡಿತು. ಪದ್ಮಲಕ್ಷ್ಮಿ ಅವರು ವಿಚ್ಚೇದನಕ್ಕೆ ತಾನೇ ಸ್ವಯಂ ಇಚ್ಚೆ ವ್ಯಕ್ತಪಡಿಸಿದ್ದಾಗಿ ಹೇಳಿಕೆ ನೀಡಿದರು. ೨೦೦೮ರಲ್ಲಿ ಬಾಲಿವುಡ್‌ ಪ್ರೆಸ್‌, ರಶ್ದಿಯವರು ಭಾರತೀಯ ರೂಪದರ್ಶಿ ರಿಯಾ ಸೇನ್‌ ಜೊತೆಗೆ ಇವರು ಪ್ರಣಯ ಸಂಬಂಧ ಹೊಂದಿದ್ದಾರೆ ಎಂದು ವರದಿ ಮಾಡಿತು. ಅದು ಬಿಟ್ಟರೆ ಇಬರಿಬ್ಬರು ಉತ್ತಮ ಸ್ನೇಹಿತರಾಗಿದ್ದಂತೂ ನಿಜವಾಗಿತ್ತು. ಮಾದ್ಯಮದ ಈ ಊಹೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ರೀಯಾ ಸೇನ್‌ " ನನಗನಿಸುತ್ತೆ ನೀವು ಸಲ್ಮಾನ್‌ ರಶ್ದಿ ಆಗಿದ್ದಿದ್ದರೆ ತಿಳಿಯುತ್ತಿತ್ತೇನೋ. ಬರೀ ಸಾಹಿತ್ಯದ ಬಗ್ಗೆ ಮಾತನಾಡುವ ಜನರ ಜೊತೆಯೇ ಇದ್ದು ನಿಮಗೆ ನಿಜವಾಗಿಯೂ ಬೇಸರ ವಾಗುತ್ತಿತ್ತು." ೧೯೯೯ರಲ್ಲಿ "ಸ್ನಾಯು ಸೆಳೆತವನ್ನು" ಸರಿಪಡಿಸಲು ರಶ್ದಿಯವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರೇ ಹೇಳಿದಂತೆ ಅವರಿಗೆ ಈ ತೊಂದರೆಯಿಂದಾಗಿ ಕಣ್ಣು ತೆರೆಯುವುದೂ ಕೂಡ ಕಠಿಣವಾಗುತ್ತಿತ್ತು. "ಈ ಶಸ್ತ್ರಚಿಕಿತ್ಸೆ ಆಗದಿದ್ದಿದ್ದರೆ ಇನ್ನು ಎರಡು ವರ್ಷಗಳಲ್ಲಿ ನಾನು ಕಣ್ಣನ್ನು ತೆರೆಯುವುದೇ ಅಸಾಧ್ಯವಾಗುತಿತ್ತು" ಎಂದು ಅವರು ಹೇಳಿದರು. == ವೃತ್ತಿಜೀವನ == === ಪ್ರಮುಖ ಸಾಹಿತ್ಯ ಕೃತಿಗಳು === ಭಾಗಶಃ ವೈಜ್ಞಾನಿಕ ಕಾದಂಬರಿಯಾಗಿದ್ದ ಅವರ ಮೊದಲನೆಯ ಕಾದಂಬರಿ ಗ್ರಿಮಸ್ ‌, ಸಾರ್ವಜನಿಕರಿಂದ ಹಾಗೂ ಸಾಹಿತ್ಯ ವಿಮರ್ಶಕರಿಂದ ನಿರ್ಲಕ್ಷಿಸಲ್ಪಟ್ಟಿತು ಎಂದೇ ಹೇಳಬಹುದು. ಅವರ ಮುಂದಿನ ಕಾದಂಬರಿ ಮಿಡ್‌ನೈಟ್ಸ್ ಚಿಲ್ಡ್ರನ್, ಅವರನ್ನು ಸಾಹಿತ್ಯ ವಲಯದಲ್ಲಿ ಉನ್ನತ ಹೆಸರನ್ನು ಗಳಿಸಿಕೊಟ್ಟಿತು. ಮುಂದಿನ ಹತ್ತು ವರ್ಷದ ಭಾರತೀಯ ಇಂಗ್ಲೀಷ್ ಬರವಣಿಗೆಗೆ ಇದು ಸ್ಪೂರ್ತಿಯಾಗುವಂತಿತ್ತು. ಇದು ಕಳೆದ ನೂರು ವರ್ಷಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತು. ಈ ಕೃತಿಗೆ ೧೯೮೧ರಲ್ಲಿ ಬೂಕರ್ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ೧೯೯೩ ಮತ್ತು ೨೦೦೮ರಲ್ಲಿ ಬೂಕರ್ ತನ್ನ ೨೫ ಮತ್ತು ೪೦ನೇ ವರ್ಷಾಚರಣೆಯ ನೆನಪಿಗಾಗಿ ಈವರೆಗೆ ಬೂಕರ್ ಪಡೆದ ಅತ್ಯುತ್ತಮ ಕಾದಂಬರಿಯಾಗಿ ಪ್ರಶಸ್ತಿ ನೀಡಿ ಗೌರವಿಸಿತು. ಭಾರತ ಸ್ವಾತಂತ್ರ್ಯ ಪಡೆದ ಮಧ್ಯರಾತ್ರಿಯಲ್ಲಿ ಜನಿಸಿದ ಒಂದು ಮಗುವಿನ ಜೀವನವನ್ನು ಮಿಡ್‌ನೈಟ್ಸ್ ಚಿಲ್ಡ್ರನ್ ಕಥೆಯಲ್ಲಿ ಹೇಳಲಾಗಿದೆ. ಆ ಸಮಯದಲ್ಲಿ ಜನಿಸಿದ ಮಗುವಿಗೆ ವಿಶಿಷ್ಟ ಶಕ್ತಿಗಳು ಇರುವಂತೆ ಮತ್ತು ಅಂದಿನ ಸೂರ್ಯೋದಯದ ಸಮಯದಲ್ಲಿ ಜನಿಸಿದ ಇನ್ನಿತರ ಮಕ್ಕಳ ಜೊತೆ ಅವನನ್ನು ಸಮೀಕರಿಸಿ ಕಥೆ ಹೆಣೆಯಲಾಗಿದೆ. ಭಾರತದ ಉಪ-ಖಂಡದ ಇತಿಹಾಸದಲ್ಲಿನ ಗದ್ದಲದ ಅವಧಿ ಹಾಗೂ ಆಧುನಿಕ ಭಾರತ ರಾಷ್ಟ್ರದ ಜನ್ಮ ಮುಂತಾದ ವಿಷಯಗಳನ್ನು ಈ ಕಾದಂಬರಿಯಲ್ಲಿ ಹೇಳಲಾಗಿದೆ. ಈ ಕಾದಂಬರಿಯಲ್ಲಿಯ ಸಲೀಮ್ ಸಿನೈ ಪಾತ್ರವನ್ನು ರಶ್ದಿಗೆ ಹೋಲಿಸ ಲಾಗುತ್ತದೆ. ಮಿಡ್‌ನೈಟ್ಸ್ ಚಿಲ್ಡ್ರನ್ ನಂತರ ರಶ್ದಿ ಅವರು ಶೇಮ್ (೧೯೮೩) ಕಾದಂಬರಿಯನ್ನು ಬರೆದರು. ಈ ಕಾದಂಬರಿಯಲ್ಲಿ ರಶ್ದಿ ಅವರು ಪಾಕಿಸ್ತಾನದಲ್ಲಿಯ ರಾಜಕೀಯ ಪ್ರಕ್ಷುಬ್ಧತೆಯನ್ನು ಚಿತ್ರಿಸಿದ್ದಾರೆ. ಇಲ್ಲಿಯ ಪಾತ್ರಗಳಿಗೆ ಇವರು ಜುಲ್ಫಿಕರ್ ಅಲಿ ಭುಟ್ಟೊ ಹಾಗೂ ಜೆನರಲ್ ಮುಹ್ಹಮದ್ ಜಿಯಾ-ಉಲ್-ಹಕ್‌ರ ಚಟುವಟಿಕೆಯನ್ನು ಆಧಾರವಾಗಿರಿಸಿಕೊಂಡಿದ್ದರು. ಶೇಮ್ ಫ್ರಾನ್ಸ್‌ನ ಉತ್ಕೃಷ್ಟ ವಿದೇಶಿ ಪ್ರಶಸ್ತಿಗಳಿಸಿತು ಹಾಗೂ ಬೂಕರ್ ಪ್ರಶಸ್ತಿಯನ್ನು ಸ್ವಲ್ಪದರಲ್ಲಿ ಕಳೆದುಕೊಂಡಿತು. ಈ ಎರಡೂ ಪುಸ್ತಕಗಳೂ ವಸಾಹತುಷಾಹಿ ಆಡಳಿತದ ನಂತರದ ಜನಜೀವನದ ಕೃತಿಗಳಾಗಿದ್ದು ಇದನ್ನು ಕಾಲ್ಪನಿಕ ವಾಸ್ತವಿಕತೆಯ ರೀತಿಯಲ್ಲಿ ಬರೆಯಲಾಗಿದೆ. ಅಲ್ಲದೆ ಸ್ವತಃ [[ಭಾರತೀಯ ವಲಸೆ ಬಂದ ಕುಟುಂ|ಭಾರತೀಯ ವಲಸೆ ಬಂದ ಕುಟುಂ]]ಬಕ್ಕೆ ಸೇರಿದ ರಶ್ದಿ ಅವರು ಈ ಕೃತಿಗಳಲ್ಲಿ ಅದರ ಕುರಿತೂ ಬರೆದಿದ್ದಾರೆ. ರಶ್ದಿಯವರು ೧೯೮೦ರಲ್ಲಿ ನಿಕಾರಾಗುವಾದ ಬಗ್ಗೆ ಒಂದು ಕಾಲ್ಪನಿಕವಲ್ಲದ ಪುಸ್ತಕ ದ ಜಾಗ್ವಾರ್ ಸ್ಮೈಲ್ (೧೯೮೭) ಅನ್ನು ಬರೆದರು. ಈ ಪುಸ್ತಕವು ರಾಜಕೀಯ ವಿಷಯವನ್ನು ಹೊಂದಿದ್ದು ಅವರ ಸ್ಯಾಂಡಿನಿಸ್ಟಾ ರಾಜಕೀಯ ಪ್ರಯೋಗಗಳ ಕುರಿತಾದ ಅವರ ಅನುಭವ ಹಾಗೂ ಸಂಶೋಧನೆಗಳ ಅನುಭವದಿಂದ ಬರೆದ ಪುಸ್ತಕವಾಗಿದೆ. ಅವರ ಅತಿ ವಿವಾದಾತ್ಮಕ ಕೃತಿಯಾದ ದ ಸ್ಯಾಟಾನಿಕ್ ವರ್ಸಸ್ ೧೯೮೮ರಲ್ಲಿ ಪ್ರಕಾಶನಗೊಂಡಿತು (ಕೆಳಗಿನ ಭಾಗವನ್ನು ಗಮನಿಸಿ). ರಶ್ದಿ ಅವರು ಹಲವಾರು ಸಣ್ಣಕತೆಗಳನ್ನೂ ಕೂಡಾ ಬರೆದಿದ್ದಾರೆ. ಅವೆಲ್ಲವುಗಳು ಸಂಗ್ರಹಿತವಾಗಿ ’ಈಸ್ಟ್‌ ವೆಸ್ಟ್‌’ (೧೯೯೪)ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ೧೯೯೫ರಲ್ಲಿ ಪ್ರಕಟವಾದ ’ದಿ ಮೂರ್ಸ್‌ ಲಾಸ್ಟ್‌ ಸೈ’ ನಲ್ಲಿ ಭಾರತೀಯ ಕುಟುಂಬವೊಂದರ ಮಹಾಕಾವ್ಯದಂತಿದ್ದು. ಇಲ್ಲಿ ಸುಮಾರು ೧೦೦ ವರ್ಷಗಳ ಭಾರತೀಯ ಇತಿಹಾಸದ ವಾತಾವರಣವನ್ನು ಹೊಂದಿದೆ. ದಿ ಗ್ರೌಂಡ್‌ ಬಿನಿತ್‌ ಹರ್ ಫೀಟ್‌ (೧೯೯೯) ಆಧುನಿಕ ರಾಕ್‌ ಸಂಗೀತದ ಪರ್ಯಾಯ ಇತಿಹಾಸವನ್ನು ಒಳಗೊಂಡಿರುವ ಕಾಲ್ಪನಿಕ ಕೃತಿಯಾಗಿದೆ. U2 ತಂಡದ ಅನೇಕ ಹಾಡುಗಳಲ್ಲಿ ಒಂದಾಗಿರುವ ಇದೇ ಹೆಸರಿನ ಹಾಡನ್ನು ಈ ಪುಸ್ತಕದ ಹೆಸರಾಗಿ ಬಳಸಲಾಗಿದೆ. ಇದರ ನಂತರದಲ್ಲಿ ಈ ಹಾಡಿನ ಕತೃ ರಶ್ದಿ ಎಂದೇ ಎಲ್ಲರೂ ಎಂದುಕೊಂಡಿದ್ದಾರೆ. ವ್ಯಾವಹಾರಿಕ ದೃಷ್ಟಿಯಿಂದ ಹಲವು ಯಶಸ್ವಿ ಹಾಗೂ ಉತ್ತಮ ವಿಮರ್ಷೆ ಗಳಿಸಿದ ಕಾದಂಬರಿಗಳ ಸರಣಿಯನ್ನೇ ರಶ್ದಿಯವರು ಬರೆದಿದ್ದಾರೆ. ಅವರ ೨೦೦೫ರ ಕಾದಂಬರಿ ಶಾಲಿಮಾರ್ ದ ಕ್ಲೌನ್‌ ಗೆ ಭಾರತದಲ್ಲಿ ಪ್ರತಿಷ್ಠಿತ ಕ್ರಾಸ್‌ವರ್ಡ್ ಫಿಕ್ಷನ್ ಪ್ರಶಸ್ತಿ ದೊರಕಿತು ಹಾಗೂ ಬ್ರಿಟನ್‌ನಲ್ಲಿ ವ್ಹಿಟ್‌ಬ್ರೆಡ್ ಬುಕ್ ಪ್ರಶಸ್ತಿಗೆ ಅಂತಿಮ-ಸ್ಪರ್ಧಿಯಾಗಿತ್ತು. ೨೦೦೭ರಲ್ಲಿ ಅಂತರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿಯ ಆಯ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದು ಇತ್ತು. ೨೦೦೨ರ ಕಾಲ್ಪನಿಕವಲ್ಲದ ಸಂಗ್ರಹ ಸ್ಟೆಪ್ ಅಕ್ರಾಸ್ ದಿಸ್ ಲೈನ್‌ ನಲ್ಲಿ ಅವರು ಇಟಾಲಿಯನ್ ಬರಹಗಾರರಾದ ಇಟಾಲೊ ಕ್ಯಾಲ್ವಿನೊ ಹಾಗೂ ಅಮೇರಿಕಾದ ಬರಹಗಾರರಾದ ಥೋಮಸ್ ಪೈನ್‌ಚನ್‌ರ ಮುಂತಾದ ಇತರ ಬರಹಗಾರರ ಕುರಿತಾದ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಆರಂಭದಲ್ಲಿ ಜೇಮ್ಸ್ ಜಾಯ್ಸ್‌, ಗುಂಟರ್ ಗ್ರಾಸ್, ಜಾರ್ಜ್‌ ಲೂಯಿಸ್ ಬೋರ್ಗೇಸ್, ಮಿಕಾಯಿಲ್‌ ಬಲ್ಗಾಕೊವ್‌ ಹಾಗೂ ಲೇವಿಸ್ ಕ್ಯಾರಲ್‌ರಿಂದ ಪ್ರಭಾವಿತರಾಗಿದ್ದರು. ರಶ್ದಿಯವರು ಆಂಜೆಲಾ ಕಾರ್ಟರ್‌ರ ವೈಯುಕ್ತಿಕ ಮಿತ್ರರಾಗಿದ್ದು ಇವರ ಕೃತಿಗಳ ಸಂಗ್ರಹ ಬರ್ನಿಂಗ್ ಯುವರ್ ಬೂಟ್ಸ್‌ ನ್ನು ಹೆಚ್ಚಾಗಿ ಪ್ರಶಂಸಿಸುತ್ತಿದ್ದರು. === ಇತರೆ ಚಟುವಟಿಕೆಗಳು === ರಶ್ದಿ ಭಾರತದ ಯುವ ಬರಹಗಾರರಿಗೆ ನೆಚ್ಚಿನವರಾಗಿದ್ದಾರೆ. ಇಂಡೊ-ಆಂಗ್ಲೀಯನ್ ಮತ್ತು ಸಂಪೂರ್ಣ ಭಾರತೀಯ ಸಂಜಾತರಾದ ಯುವ ಬರಹಗಾರರಿಗೆ ಪ್ರಭಾವ ಬೀರಿದ ವ್ಯಕ್ತಿತ್ವ ಇವರದಾಗಿದೆ. ವಸಾಹತು ಶಾಹಿ ಕಾಲದ ನಂತರದ ಘಟನೆಗಳ ಕುರಿತು ಬರೆಯಬಲ್ಲ ಪ್ರಭಾವಿ ಬರಹಗಾರರು ಇವರಾಗಿದ್ದಾರೆ. ಸಾಹಿತ್ಯಕ್ಕಾಗಿ ಯುರೋಪಿಯನ್ ಯುನಿಯನ್‌ನ ಅರಿಸ್ಟೆಯೊನ್ ಪ್ರಶಸ್ತಿ,(ಇಟಲಿ)ಯ ಪ್ರೀಮಿಯೋ ಗ್ರಿನ್‌ಜಾನೆ ಕೆವೊಯರ್, ಜರ್ಮನಿಯ ವರ್ಷದ ಬರಹಗಾರ ಪ್ರಶಸ್ತಿ, ಮತ್ತು ಸಾಹಿತ್ಯದ ಉನ್ನತ ಗೌರವ ಒಳಗೊಂಡಂತೆ ಅವರ ಬರಹಗಳಿಗೆ ಹಲವು ಪ್ರಶಂಸೆಗಳನ್ನು ಪಡೆದಿದ್ದಾರೆ. ೨೦೦೪ ರಿಂದ ೨೦೦೬ರವರೆಗೂ ರಶ್ದಿ ಅಮೆರಿಕನ್ ಸೆಂಟರ್‌ನ ಅಧ್ಯಕ್ಷರಾಗಿದ್ದರು. ಅವರು ಬ್ರಿಟಿಷ್‌‌ ಸರ್ಕಾರದ ಜನಾಂಗೀಯ ಮತ್ತು ಧಾರ್ಮಿಕ ದ್ವೇಷದ ಕಾಯ್ದೆಯ ಪರಿಚಯವನ್ನು ವಿರೋಧಿಸಿದರು, ಅದರ ಬಗ್ಗೆ ಅವರು, ಫ್ರೀ ಎಕ್ಸ್‌ಪ್ರೆಷನ್ ಈಸ್ ನೋ ಆಫೆನ್ಸ್‌ ಗೆ ತಮ್ಮ ಕೊಡುಗೆಯಾಗಿ ಬರೆದರು, ಅದೊಂದು ಅನೇಕ ಬರಹಗಾರರು ಬರೆದಿರುವ ಪ್ರಂಬಂಧಗಳ ಸಂಗ್ರಹವಾಗಿದ್ದು, ನವೆಂಬರ್ ೨೦೦೫ರಲ್ಲಿ ಪೆಂಗ್ವಿನ್‌ನಿಂದ ಪ್ರಕಟಗೊಂಡಿತು. ರಶ್ದಿ ಅವರು ಸ್ವಯಂ-ಪ್ರೇರಿತ ನಾಸ್ತಿಕರಾಗಿದ್ದರು ಮತ್ತು ಬ್ರಿಟಿಷ್ ಹ್ಯೂಮನಿಸ್ಟ್ ಅಸೋಸಿಯೇಷನ್‌ನ ಜನಪ್ರಿಯ ಬೆಂಬಲಿಗರಾಗಿದ್ದರು. ೨೦೦೬ರಲ್ಲಿ ರಶ್ದಿ ಅವರು ವರ್ಷಕ್ಕೆ ಒಂದು ತಿಂಗಳಂತೆ ಮುಂದಿನ ಐದು ವರ್ಷಗಳವರೆಗೆ ವರ್ಷಕ್ಕೆ ಒಂದು ತಿಂಗಳು ಬರೆಯಬಲ್ಲ ಹೆಸರುವಾಸಿ ಬರಹಗಾರರಾಗಿ ಎಮೊರಿ ಯೂನಿವರ್ಸಿಟಿ ಸಿಬ್ಬಂದಿ ವರ್ಗವನ್ನು ಸೇರಿದರು. ಸಲ್ಮಾನ್ ರಶ್ದಿ ಬರಹವನ್ನೂ ಆನಂದಿಸಿದರಾದರೂ, ತನ್ನ ಬರಹ ವೃತ್ತಿ ಯಶಸ್ವಿಯಾಗಿರದಿದ್ದರೆ ನಾನು ನಟನಾಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಬಾಲ್ಯದಿಂದಲೂ ಹಾಲಿವುಡ್ ಚಿತ್ರಗಳಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದರಂತೆ. (ನಂತರದಲ್ಲಿ ತಾವು ಪದೆಪದೇ ಕ್ಯಾಮೆರಾದ ಎದುರು ಕಾಣಿಸಿಕೊಂಡಾಗ ನೆನೆಸಿಕೊಂಡರಂತೆ.) ರಶ್ದಿ ಅವರು ತಮ್ಮ ಬರಹಗಳಲ್ಲಿ ಕಾಲ್ಪನಿಕ ಟಿವಿ ಮತ್ತು ಸಿನೆಮಾ ಪಾತ್ರಗಳನ್ನೂ ಕೂಡ ಕೆಲವೊಮ್ಮೆ ಸೇರಿಸಿಕೊಂಡಿದ್ದಾರೆ. ಅವರು ಬುಕ್ ಆಫ್ ದ ಸೇಮ್ ನೇಮ್‌ಆಧಾರಿತ ಬ್ರಿಡ್ಜೆಟ್ ಜೋನ್‌’ಸ್ ಡೈರಿ ಸಿನಿಮಾದಲ್ಲಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡರು. ಅದು ಸಂಪೂರ್ಣವಾಗಿ ಸಾಹಿತ್ಯದ ಹಾಸ್ಯಗಳನ್ನು ಒಳಗೊಂಡಿತ್ತು. ೧೨ ಮೇ ೨೦೦೬ ರಲ್ಲಿ, ರಶ್ದಿ ಅವರು ದ ಚಾರ್ಲೀ ರೋಸ್ ಶೋ ನಲ್ಲಿ ಅತಿಥಿಯಾಗಿದ್ದರು. ಅಲ್ಲಿ ಅವರನ್ನು ಇಂಡೋ-ಕೆನಡಾದ ಚಿತ್ರ ನಿರ್ದೇಶಕ ದೀಪ ಮೆಹ್ತಾ ಸಂದರ್ಶಿಸಿದರು. ಮೇಹ್ತಾ ಅವರು ೨೦೦೫ರ ವಾಟರ್ ಚಿತ್ರದ ಕುರಿತಾಗಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಅವರು ಎಲಿನರ್ ಲಿಪ್‌ಮನ್‌ರ ಕಾದಂಬರಿ ದೆನ್ ಶಿ ಫೌಂಡ್ ಮಿ ಚಿತ್ರದ ಅವರಣಿಕೆಯಲ್ಲಿ(ಹಂಟ್‌ರ ಪ್ರಥಮ ನಿರ್ದೇಶನ) ಹೆಲೆನ್ ಹಂಟ್‌ರ ಪ್ರಸೂತಿ ವಿಜ್ಞಾನಿ-ಸ್ತ್ರೀರೋಗ ವೈದ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ‍್ ೨೦೦೮ ಮತ್ತು ಮಾರ್ಚ್‌ ೨೦೦೯ರಲ್ಲಿ ಅವರು ಹೆಚ್‌ಬಿಒ ಕಾರ್ಯಕ್ರಮ "ರಿಯಲ್ ಟೈಮ್ ವಿತ್ ಬಿಲ್ ಮಹೆರ್"ನಲ್ಲಿ ಚರ್ಚೆಗೆ ಬಂದವರಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. ರಶ್ದಿ ಅವರು ಪ್ರಸ್ತುತ ನಿರ್ದೇಶಕಿ ದೀಪಾ ಮೆಹ್ತಾ ಅವರೊಂದಿಗೆ ತಮ್ಮ ಕಾದಂಬರಿ ಮಿಡ್‌ನೈಟ್ ಚಿಲ್ಡ್ರನ್‌ ನ ಸಿನೆಮಾ ಅವತರಣಿಕೆಗಾಗಿ ಚಿತ್ರಕಥೆ ಬರೆಯುವುದಕ್ಕೆ ಸಹಕರಿಸುತ್ತಿದ್ದಾರೆ. ಈ ಚಿತ್ರವನ್ನು ಮಿಡ್‌ನೈಟ್ಸ್‌ ಚಿಲ್ಡ್ರನ್ ಎಂದು ಹೆಸರಿಸಲಾಗಿದೆ. ಈಗಾಗಲೇ ಪಾತ್ರದ ಆಯ್ಕೆ ಮುಂದುವರೆದಿದ್ದು, ಸೀಮಾ ಬಿಶ್ವಾಸ್, ಶಬಾನಾ ಅಜ್ಮಿ, ನಂದಿತಾ ದಾಸ್ ಮತ್ತು ಇರ್ಫಾನ್ ಖಾನ್ ಈ ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಚಿತ್ರದ ನಿರ್ಮಾಣ ಕಾರ್ಯವನ್ನು ಸೆಪ್ಟೆಂಬರ್ ೨೦೧೦ರಲ್ಲಿ ಆರಂಭಿಸುವುದಾಗಿ ಮೆಹ್ತಾ ಹೇಳಿದ್ದಾರೆ. == ದಿ ಸ್ಯಾಟನಿಕ್ ವರ್ಸಸ್ ಮತ್ತು ದಿ ಫತ್ವಾ [29] == ೧೯೮೮ಸೆಪ್ಟೆಂಬರ್ ನಲ್ಲಿ ದಿ ಸೆಟಾನಿಕ್‌ ವರ್ಸಸ್ ಕೃತಿ ಪ್ರಕಟಣೆಗೊಂಡ ತಕ್ಷಣ, ಇಸ್ಲಾಂ ಜಗತ್ತಿನಲ್ಲಿ ಇದು ತೀವೃ ವಿವಾದಕ್ಕೊಳಗಾಯಿತು ಏಕೆಂದರೆ ಇದರಲ್ಲಿ ಮೊಹಮದ್ ಪೈಗಂಬರ್ ಅವರನ್ನು ಗೌರವವಿಲ್ಲದೆ ಚಿತ್ರಸಲಾಗಿದೆ ಎಂದು ತಿಳಿಯಲಾಯಿತು. ಈ ಪುಸ್ತಕದ ಶೀರ್ಷಿಕೆಯು ವಿವಾದದಲ್ಲಿರುವ ಮುಸ್ಲಿಂ ಸಂಪ್ರದಾಯವನ್ನು ಕುರಿತು ಹೇಳುತ್ತದೆ ಮತ್ತು ಈ ಪುಸ್ತಕ ಆ ಸಂಪ್ರದಾಯದ ಕುರಿತೇ ಬರೆದಂತದ್ದಾಗಿದೆ. ಈ ಸಂಪ್ರದಾಯದಂತೆ, ಮೆಕ್ಕಾದಲ್ಲಿ ಪೂಜಿಸಲ್ಪಡುವ ಮೂರು ದೇವತೆಗಳನ್ನು ಒಪ್ಪಿಕೊಳ್ಳುವ ಮೂಲಕ ಮೊಹಮದ್ ( ಈ ಪುಸ್ತಕದಲ್ಲಿ ಮಹಂದ್)ರು ಖುರಾನ್‌ಗೆ ಕವನಗಳನ್ನು (ಸುರಾ ) ಸೇರಿಸಿದರು. ಪುರಾಣದ ಪ್ರಕಾರ ಮೆಕ್ಕಾದವರನ್ನು ಸಮಾಧಾನಪಡಿಸಲು ಮಹಮದ್ದರು,ಪಿಶಾಚಿಯು ತಮ್ಮಲ್ಲಿ ಈ ಸಾಲುಗಳನ್ನು ನುಡಿಯಲು ಪ್ರಚೋದಿಸಿತು ಎಂದು ಹೇಳುತ್ತ, ನಂತರದಲ್ಲಿ ಆ ಕವನಗಳನ್ನು ಅಳಿಸಿಹಾಕಿದರು.(ಅದಕ್ಕೋಸ್ಕರ ದಿ "ಸ್ಯಾಟನಿಕ್" ವರ್ಸಸ್). ಹಾಗಿದ್ದರೂ, ಕಥಾಗಾರರು ಓದುಗನಿಗೆ ಈ ವಿವಾದಿತ ಕವಿತೆಯು ವಾಸ್ತವವಾಗಿ ಆರ್ಕ್ ಏಂಜೆಲ್ ಗಿಬ್ರೀಲ್ಮಾತು ಎಂದು ತಿಳಿಸಿಕೊಡುತ್ತಾರೆ. ಬಹುವಾಗಿ ಮುಸ್ಲಿಂ ಸಮಾಜ ಇರುವ ಅನೇಕ ದೇಶಗಳಲ್ಲಿ ಈ ಪುಸ್ತಕವನ್ನು ನಿಷೇಧಿಸಲಾಯಿತು. ೧೯೮೯ ಫೆಬ್ರುವರಿ ೧೪ ರಂದು ಒಂದು ಇಸ್ಲಾಂ ಧರ್ಮದ ಕಾನೂನನ್ನು ಅನುಸರಿಸುವ ಗುಂಪು(ಫತ್ವಾ) ರಶ್ದಿಯವರ ಗಲ್ಲು ಶಿಕ್ಷೆಯನ್ನು ಬಯಸುತ್ತಿರುವುದಾಗಿ ರೇಡಿಯೊ ಥೆಹ್ರಾನ್‍ನಲ್ಲಿ ಆಗಿನ ಇರಾನ್‍ನ ಧಾರ್ಮಿಕ ಮುಖಂಡ ಅಯತೊಲ್ಲಾಹ್ ರುಹೊಲ್ಲಾಹ್ ಖೊಮೆನಿ ಅವರಿಂದ" ಇಸ್ಲಾಂ ವಿರುದ್ಧ ಅಲಕ್ಷ್ಯದಿಂದ ಕಂಡ" ಪುಸ್ತಕ ಎಂದು ಹೇಳಲ್ಪಟ್ಟಿತು. (ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ಐಮನ್ ವ್ಯಕ್ತಿತ್ವವನ್ನು ಅವರ ದೇಶದ ಜನರ ರಕ್ಷಣೆಯನ್ನೂ ಗಮನಿಸದೆ ಬಂಡಾಯವನ್ನು ಪ್ರಚೋದಿಸಲು ಮರಳುವ,ದೇಶಭ್ರಷ್ಟನಂತೆ ಚಿತ್ರಿಸಲಾಗಿದೆ). ರಿಷ್ದಿಯವರ ಸಾವಿಗೆ ಅಪಾರ ದಾನ ಕೊಡಲು ಸೂಚಿಸಲಾಯಿತು, ಮತ್ತು ಇದರಿಂದ ಇವರು ಒತ್ತಾಯಪೂರ್ವಕವಾಗಿ ನಂತರದ ವರ್ಷಗಳಲ್ಲಿ ಪೋಲೀಸರ ರಕ್ಷಣೆಯಲ್ಲಿ ಉಳಿಯುವಂತಾಯಿತು. ರಶ್ದಿಯವರ ವಿವಾದದಿಂದಾಗಿ ೧೯೮೯ರ ಮಾರ್ಚ್ ೭ರಂದು ಯುನೈಟೆಡ್ ಕಿಂಗ್ ಡಮ್ ಮತ್ತು ಇರಾನ್ ಮಧ್ಯೆ ರಾಜತಾಂತ್ರಿಕ ಸಂಬಂಧವು ಬೇರ್ಪಟ್ಟಿತು. ಪುಸ್ತಕ ಪ್ರಕಟಣೆ ಮತ್ತು ಫತ್ವಾ ಹಿಂಸೆಯ ಕಿಡಿ ಹೊತ್ತಿಸಿದವು ಹಾಗೂ ಜಗತ್ತಿನ ಸುತ್ತ ಎಲ್ಲಾ ಪುಸ್ತಕ ಮಳಿಗೆಗಳು ಬೆಂಕಿಯ ಸಿಡಿಮದ್ದುಗಳಾದವು. ಪಶ್ಚಿಮದ ಹಲವು ರಾಷ್ಟ್ರಗಳಲ್ಲಿ ಮುಸ್ಲಿಂ ಸಮಾಜ ಸಾರ್ವಜನಿಕ ಮೆರವಣಿಗೆಯನ್ನು ಏರ್ಪಡಿಸಿತು ಮತ್ತು ಅದರಲ್ಲಿ ಪುಸ್ತಕದ ಪ್ರತಿಗಳನ್ನು ಸುಡಲಾಯಿತು. ಅನುವಾದಕರು ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಸಹಕರಿಸಿದ ಹಲವು ಜನರು ಆಕ್ರಮಣಕ್ಕೊಳಗಾದರು, ಗಂಭೀರವಾಗಿ ಗಾಯಗೊಂಡರು ಮತ್ತು ಕೆಲವರನ್ನು ಕೊಲೆ ಕೂಡ ಮಾಡಲಾಯಿತು. ಜಗತ್ತಿನ ಮೂರನೇ ರಾಷ್ಟ್ರಗಳಲ್ಲಿ ಹಲವು ಜನ ಹಿಂಸಾಚಾರದಲ್ಲಿ ಸಾಯಲ್ಪಟ್ಟರು. ೧೯೯೮ರ ಸೆಪ್ಟೆಂಬರ್ ೨೪ರಂದು ಪೂರ್ವಕರಾರಿನಂತೆ, ಬ್ರಿಟನ್ ರಾಜತಾಂತ್ರಿಕ ಸಂಬಂಧವನ್ನುಪುನರ್ ಸ್ಥಾಪಿಸಲು, ಇರಾನ್ ಸರಕಾರವು ಮೊಹಮದ್ ಖತಾಮಿ ನಾಯಕತ್ವದಲ್ಲಿ ಈ ರೀತಿಯಾಗಿ ಒಂದು ಸಾರ್ವಜನಿಕ ಬದ್ಧತೆ ನೀಡಿತು "ರಶ್ದಿಯವರ ಹತ್ಯೆಯ ಕಾರ್ಯದಲ್ಲಿ ಒಂದೋ ಸಹಕರಿಸಬೇಕು ಇಲ್ಲವೆ ತಡೆ ಮಾಡಬೇಕು" ಎಂದು. ಇರಾನಿನ ಪ್ರತಿಭಟನಾಕಾರರು ಸಾವಿನ ಅಭಿಮತವನ್ನು ಒತ್ತಿ ಹೇಳುವುದನ್ನು ಮುಂದುವರೆಸಿದರು. ೨೦೦೫ರ ಪೂರ್ವದಲ್ಲಿ ಇರಾನಿನ ಖೊಮೆನಿಯವರ ಫತ್ವಾ ವು ಧಾರ್ಮಿಕ ಮುಖಂಡರಿಂದ ಪುನಃ ದೃಢೀಕರಿಸಲ್ಪಟ್ಟಿತು,ಅಯತೊಲ್ಲಾಹ್ ಅಲಿ ಖಮೆನಿ ಅವರ ಸಂದೇಶದಲ್ಲಿ ಮುಸ್ಲಿಂ ಯಾತ್ರಿಕರಿಗೆ ಮೆಕ್ಕಾವು ವಾರ್ಷಿಕ ತೀರ್ಥಯಾತ್ರೆ ಎಂದು ಹೇಳಲಾಯಿತು. ಜೊತೆಗೆ, ಕ್ರಾಂತಿಕಾರಿ ರಕ್ಷಕರು ರಶ್ದಿಯವರ ಮರಣ ವಾಕ್ಯ ಇನ್ನೂ ಸಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದರು. ಯಾವ ವ್ಯಕ್ತಿ ಪ್ರಕಟಣೆ ಹೊರಡಿಸಿರುತ್ತಾರೋ ಕೇವಲ ಅವರೊಂದೇ ಅದನ್ನು ಹಿಂಪಡೆಯಲು ಸಾಧ್ಯ ಎನ್ನುವ ಆಧಾರದ ಮೇಲೆ ಫತ್ವಾ ಹಿಂತೆಗೆದುಕೊಳ್ಳಲು ಮಾಡಿದ ಮನವಿಯನ್ನು ಇರಾನ್ ಸರಕಾರ ನಿರಾಕರಿಸಿತು, ಮತ್ತು ಈ ಪ್ರಕಟಣೆ ಹೊರಡಿಸಿದ ವ್ಯಕ್ತಿ ಅಯತೊಲ್ಲಾಹ್ ಖೊಮೆನಿ ಅವರು ೧೯೮೯ರ ತರುವಾಯ ನಿಧನರಾಗಿದ್ದರು. ರಶ್ದಿಯವರು, ಈಗಲೂ ಇರಾನ್ ದೇಶ ಇವರನ್ನು ಕೊಲ್ಲುವ ವಚನವನ್ನು ಮರೆತಿಲ್ಲ ಎಂದು ತಿಳಿಸುವ "ವ್ಯಾಲೆಂಟೈನ್ ರೀತಿಯ ಕಾರ್ಡನ್ನು" ಪ್ರತೀವರ್ಷ ಫೆಬ್ರುವರಿಗೆ ೧೪ಕ್ಕೆ ಪಡೆಯುತ್ತಿರುತ್ತೇನೆ ಎಂದು ಹೇಳುತ್ತಾರೆ. "ಇದು ಒಂದು ನಿಜವಾದ ಹೆದರಿಕೆ ಎನ್ನುವ ಬದಲು ಕೃತಕ ಅಂಶ ಎಂಬ ಭಾವನೆಯನ್ನು ತಲುಪಿದ್ದೇನೆ" ಎಂದು ಹೇಳುತ್ತಾರೆ. ರಶ್ದಿಯವರ ಮೇಲೆ ಭಯ ಇದ್ದಾಗಿಯೂ, ಇವರ ಕುಟುಂಬವು ಯಾವಾಗಲೂ ಹೆದರಿಕೆಯಿಂದ ಉಳಿದಿಲ್ಲ ಮತ್ತು ಇವರ ತಾಯಿ (ಜೀವನದ ಕೊನೆಯ ದಿನಗಳಲ್ಲಿ ಪಾಕಿಸ್ತಾನದಲ್ಲಿ ನೆಲಿಸಿದ್ದರು) ಕೂಡ ಬಹುಭಾವಾಭಿವ್ಯಕ್ತಿಯ ಬೆಂಬಲವನ್ನು ಗಳಿಸಿದ್ದರು ಎಂವು ಸಾರ್ವಜನಿಕವಾಗಿ ಹೇಳುತ್ತಾರೆ. ರಶ್ದಿಯವರ ಹಿಂದಿನ ಅಂಗರಕ್ಷಕ ರಣ್ ಇವಾನ್ಸ್ ಅವರು, ಇವರು ಅಡಗಿಕೊಂಡ ಸಮಯದಲ್ಲಿ ಲೇಖಕರ ವರ್ತನೆಯ ಕುರಿತು ವಿವರವಾಗಿ ಒಂದು ಪುಸ್ತಕವನ್ನು ಪ್ರಕಟಿಸುವ ಯೋಜನೆಯನ್ನು ರೂಪಿಸಿದರು. ರಶ್ದಿಯವರು ಫತ್ವಾದಿಂದ ಆರ್ಥಿಕ ವಾಗಿ ಲಾಭ ಪಡೆಯಲು ಯತ್ನಿಸಿದರು ಮತ್ತು ಆತ್ಮಘಾತಕವಾಗಿತ್ತು ಎಂದು ಇವಾನ್ ಅವರು ಆರೋಪಿಸಿದರು. ಆದರೆ ರಶ್ದಿಯವರು ಈ ಪುಸ್ತಕವನ್ನು "ಸುಳ್ಳಿನ ಕಂತೆ" ಎಂದು ತಳ್ಳಿಹಾಕಿದರು ಮತ್ತು ರೊಣ್ ಇವಾನ್ಸ್‌, ಅವರ ಸಹ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಂಡರು. ೨೦೦೮ರ ಅಗಸ್ಟ್ ೨೬ರಲ್ಲಿ ಲಂಡನ್ ಹೈ ಕೋರ್ಟ್ ನಲ್ಲಿ ರಶ್ದಿಯವರು ಎಲ್ಲ ಮೂರು ಜನರಿಂದ ಕ್ಷಮೆ ಪಡೆದರು. === ಹತ್ಯೆಯ ವಿಫಲ ಯತ್ನ ಮತ್ತು ಹೆಜ್ಬೊಲ್ಲಾಹ್‌ರ ಟೀಕೆ === ೧೯೮೯ರ ಆಗಸ್ಟ್ ೩ರಲ್ಲಿ, ಮುಸ್ತಪ್ಫಾ ಮಹ್ಮದ್ ಮಝೆಹ್, ಸೆಂಟ್ರಲ್ ಲಂಡನ್ನಿನ ಪೆಡ್ಡಿಂಗ್ಟನ್ ಹೋಟೆಲ್ ನಲ್ಲಿ RDXನಿಂದ ತುಂಬಿದ ಸಿಡಿಮದ್ದು ಸ್ಫೋಟಿಸಲು ಅಣಿಯಾಗುತ್ತಿರಲು, ಸಿಡಿಮದ್ದು ಮುಂಚಿತವಾಗಿಯೇ ಸಿಡಿದು ಹೋಟೆಲ್ಲಿನ ಎರಡು ಅಂತಸ್ತುಗಳನ್ನು ಆವರಿಸಿಕೊಂಡು ಮಝೆಹ್ ಅವರು ಕೊಲ್ಲಲ್ಪಡುತ್ತಾರೆ. ಮೊದಲು ಅಜ್ಞಾತವಾಗಿದ್ದ ಇಸ್ಲಾಂ ಮುಜಾಹಿದ್ದೀನ್ ಸಂಘಟನೆಯಾದ ಲೆಬೆನೀಸ್ ಗುಂಪು, "ಸ್ವಧರ್ಮ ಪರಿತ್ಯಾಗಿಯಾದ ರಶ್ದಿಯವರ" ಮೇಲೆ ಆಕ್ರಮಣಕ್ಕೆ ಅಣಿಯಾಗುತ್ತಿರುವಾಗಲೇ ಅವರು ಮಡಿದರು ಎಂದು ಹೇಳಿತು. ತೆಹ್ರಾನ್‌ನಲ್ಲೊಂದು ಮುಸ್ತಫಾ ಮಹಮದ್ ಮಝೆಹ್ ಅವರ ಸಮಾಧಿಸ್ಥಳವಾದ ಬಿಹೆಶ್ತ್-ಇ ಜಹ್ರಾ ಎಂಬ ಮಂದಿರವಿದೆ. ಅದು "೧೯೮೯ರ ಆಗಸ್ಟ್ ೩ರಂದು ಅವನು ಲಂಡನ್ನಿನಲ್ಲಿ ಆತ್ಮಾಹುತಿಯಾದನೆಂದು ಹೇಳುತ್ತದೆ. ಸಲ್ಮಾನ್ ರಶ್ದಿಯವರ ಕೊಲೆಗೈಯ್ಯುವ ಮಿಷನ್ ನಲ್ಲಿ ಇವರು ಮೊದಲ ಹುತಾತ್ಮರು". ಮಝೆಹ್ ಅವರ ತಾಯಿ ಇರಾನಿನ ಹೊಸ ಜಾಗದಲ್ಲಿ ವಾಸಿಸಲು ಆಹ್ವಾನಿತರಾದರು ಮತ್ತು ಇಸ್ಲಾಮಿಕ್ ವರ್ಲ್ಡ್ ಮೂವ್ ಮೆಂಟ್ ಆಫ್ ಮಾರ್‌ಟೈರ್ಸ್ ಇವರ ಸ್ಮರಣಾರ್ಥವಾಗಿ ಮಂದಿರವನ್ನು ನಿರ್ಮಿಸಿತು ಇದು ಇರಾನ್-ಇರಾಕ್ ಯುದ್ಧದಲ್ಲಿ ಮಡಿದ ಸಾವಿರಾರು ಇರಾನಿ ಸೈನಿಕರ ಸಮಾಧಿಯನ್ನು ಹೊಂದಿದೆ. ೨೦೦೬ ರಲ್ಲಿ ಜಿಲ್ಯಾಂಡ್ಸ್-ಪೋಸ್ಟೆನ್ ಮೊಹಮದ್ ಕಾರ್ಟೂನ್ಸ್ ವಿವಾದವು, ಹೆಜ್ಬೊಲ್ಲಾಹ್ ಮುಖ್ಯಸ್ಥ ಹಸನ್ ನಸ್ರಲ್ಲಾಹ್ ಅವರಿಂದ ಹೀಗೆ ಹೇಳಲ್ಪಟ್ಟಿತು, "ಯಾರಾದರೊಬ್ಬ ಮುಸ್ಲಿಂ, ಇಮಮ್ ಖೊಮೆನಿ ಅವರ ಫತ್ವಾ ವಿರುದ್ಧ ಕಾರ್ಯನಡೆಸುವವರೆಂದರೆ ಅವರು ಸ್ವಧರ್ಮತ್ಯಾಗಿ ಸಲ್ಮಾನ್ ರಶ್ದಿ, ಈ ಜನಜಂಗುಳಿಯಲ್ಲಿ ಡೆನ್ಮಾರ್ಕ್, ನಾರ್ವೆ ಮತ್ತು ಫ್ರಾನ್ಸ್ ನಲ್ಲಿ ನಮ್ಮ ಪ್ರವಾದಿ ಮೊಹಮದ್ದರ ಕುರಿತು ಅವಮಾನ ಮಾಡುವ ಧೈರ್ಯ ಇವರಿಗಿಲ್ಲ. ನಾನು ನಿಶ್ಚಿತವಾಗಿ ಹೇಳಬಲ್ಲೆ ನಮ್ಮ ಪ್ರವಾದಿಯವರ ಗೌರವ ಉಳಿಸಲು ಅಲ್ಲಿ ಲಕ್ಷಗಟ್ಟಲೆ ಮುಸ್ಲಿಮರು ತಮ್ಮ ಪ್ರಾಣ ನೀಡಲೂ ಸಿದ್ಧರಿದ್ದಾರೆ ಮತ್ತು ಅದಕ್ಕಾಗಿ ನಾವು ಏನುಮಾಡಲೂ ಸಿದ್ಧರಿದ್ದೇವೆ". ಹೆರಿಟೇಜ್ ಫೌಂಡೇಷನ್‌ನ ಜೇಮ್ಸ್ ಫಿಲಿಪ್ಸ್, ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್‌ಗಿಂತ ಮುಂಚೆ ತಮ್ಮ ಸಾಕ್ಷ್ಯ ನೀಡಿದರು. ಅದರಂತೆ "ಮಾರ್ಚ್ ೧೯೮೯ರಲ್ಲಿ"(ಇತಿ ಲಿಖಿತ) ಬ್ರಿಟನ್ನಿನಲ್ಲಿ ರಶ್ದಿಯವರ ಕೊಲೆಗೈಯ್ಯಲು ಹೆಝಬೊಲ್ಲಾಹ್ ನಡೆಸಿದ ಸ್ಫೋಟದ ವಿಫಲ ಯತ್ನ, ಸಿಡಿಮದ್ದು ಮುಂಚಿತವಾಗಿಯೇ ಸಿಡಿಯಲ್ಪಟ್ಟು ಇದರಿಂದ ಹೆಝಬೊಲ್ಲಾಹ್ ದ ಕ್ರಿಯಾವಾದಿ ಲಂಡನ್ನಿನಲ್ಲಿ ಕೊಲ್ಲಲ್ಪಟ್ಟ. === ಇಂಟರ್‌ನ್ಯಾಷನಲ್ ಗೆರಿಲ್ಲಾ === ದಿ ಸ್ಯಾಟನಿಕ್ ವರ್ಸಸ್ ಪುಸ್ತಕ ಪ್ರಕಟಣೆಗೊಂಡ ಕೂಡಲೆ ೧೯೯೦ರಲ್ಲಿ ಒಂದು ಪಾಕಿಸ್ತಾನಿ ಚಿತ್ರ ಬಿಡುಗಡೆಗೊಂಡಿತು, ಅದರಲ್ಲಿ ರಶ್ದಿಯವರನ್ನು, ದೇಶದಲ್ಲಿ ಜೂಜುಕೇಂದ್ರಗಳ ಮತ್ತು ಡಿಸ್ಕೊಗಳ ಸರಣಿಯನ್ನು ತೆರೆಯುವ ಮೂಲಕ ಪಾಕಿಸ್ತಾನದ ಅವನತಿಗೆ ಒಳಸಂಚು ನಡೆಸುವವರಂತೆ ಚಿತ್ರಿಸಲಾಗಿದೆ. ಪಾಕಿಸ್ತಾನಿ ಪ್ರೇಕ್ಷಕರಲ್ಲಿ ಈ ಚಲನಚಿತ್ರ ಬಹಳ ಪ್ರಸಿದ್ಧಗೊಂಡಿತು. ಇದು "ರಶ್ದಿಯವರನ್ನು ರೇಂಬೋ ಅಂತೆ ಪರಿಚಯಿಸುತ್ತದೆ-ಅಂದರೆ ಇವರನ್ನು ನಾಲ್ಕು ಪಾಕಿಸ್ತಾನಿ ಗೆರಿಲ್ಲಾಗಳು ಬೆನ್ನಟ್ಟಿದಂತೆ". ಇದಕ್ಕೆ ದಿ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ ಯೋಗ್ಯತಾ ಪತ್ರ ನೀಡಲು ನಿರಾಕರಿಸಿತು. ಏಕೆಂದರೆ "ರಶ್ದಿಯವರ ಪಾತ್ರ ಅಧಿಕವಾಗಿ ಅಪರಾಧಿಯಂತೆ ಅಪನಂಬಿಕೆ ಬರುವ ರೀತಿ ಇದೆ ಎಂದು ಇದು ತಿಳಿಯುತ್ತದೆ, ಹಾಗೆಯೇ ಶಾಂತಿ ಉಲ್ಲಂಘನೆಗೆ ಕಾರಣವಾಗುತ್ತದೆ, ಮತ್ತು ಇವರ ಯಶಸ್ಸು ಕುಂದಿಸುವುದನ್ನು ಇದು ವಿರೋಧಿಸುತ್ತದೆ." ಈ ಚಲನೆಯು ಪರಿಣಾಮಕಾರಿಯಾಗಿ ಬ್ರಿಟನ್ನಿನಲ್ಲಿ ಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ನಿರ್ಭಂಧಿಸುವಂತೆ ಮಾಡಿತು. ಹಾಗಿದ್ದರೂ, ಸ್ವತಃ ರಶ್ದಿಯವರು ಎರಡು ತಿಂಗಳ ನಂತರ ಮಂಡಳಿಗೆ ಈ ರೀತಿಯಾಗಿ ಪತ್ರ ಬರೆದರು, ತಾವು ತಿಳಿಯುವಂತೆ ಈ ಚಿತ್ರವು "ಒಂದು ತಿರುಚಿದ, ಅರ್ಥವಿಲ್ಲದ ಅಸಮರ್ಥ ಭಾಗ" ಈ ಚಿತ್ರ ಬಿಡುಗಡೆಗೊಂಡರೆ ತಾವು ಮೊಕದ್ದಮೆ ಹೂಡುವುದಿಲ್ಲ ಎಂದು. "ಒಂದು ವೇಳೆ ಈ ಚಿತ್ರವನ್ನು ನಿರ್ಭಂದಿಸಲ್ಪಟ್ಟರೆ, ನಗರದಲ್ಲಿ ಇದು ಹೆಚ್ಚು ಕಾವೇರಿದ ಚಿತ್ರವಾಗುತ್ತದೆ. ಪ್ರತಿಯೊಬ್ಬರೂ ಇದನ್ನು ನೋಡುತ್ತಾರೆ" ಎಂದು ನಂತರದಲ್ಲಿ ಹೇಳಿದರು. ಪಾಕಿಸ್ತಾನದಲ್ಲಿ ಈ ಚಿತ್ರವು ಅತ್ಯಧಿಕ ಜನಪ್ರಿಯತೆ ಗಳಿಸಿದರೂ ಪಶ್ಚಿಮದ ಕಡೆ ಹೇಳ ಹೆಸರಿಲ್ಲದಂತೆ ಮಾಯವಾಯಿತು. ಅವರು ಹೇಳುವಂತೆ ಆ ಚಿತ್ರದಲ್ಲೊಂದು ಉಚಿತ ಹಾಸ್ಯ ಭಾಗವಿದೆ, ಅದೆಂದರೆ ಅವರ ವ್ಯಕ್ತಿತ್ವವು ದಿ ಸ್ಯಾಟನಿಕ್ ವರ್ಸಸ್ ಪುಸ್ತಕ ಓದುವ ಮೂಲಕ ಪಾಕಿಸ್ತಾನಿ ಯೋಧನನ್ನು ಹಿಂಸೆಕೊಡುವುದು. == ನೈಟ್ ಹುಡ್ == ರಶ್ದಿಯವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ರಾಣಿಯವರ ಹುಟ್ಟಿದಹಬ್ಬದ ಗೌರವಾರ್ಥ ೨೦೦೭ರ ಜೂನ್ ೧೬ರಂದು ನೈಟ್ ಹುಡ್ ಪ್ರಶಸ್ತಿಯನ್ನು ಗಳಿಸಿದರು. ಅವರು, "ನಾನು ರೋಮಾಂಚನಗೊಂಡಿದ್ದೇನೆ ಮತ್ತು ಈ ಮಹತ್ವದ ಗೌರವ ಪಡೆಯಲು ವಿನಮ್ರನಾಗಿದ್ದೇನೆ ಹಾಗೂ ನನ್ನ ಕಾರ್ಯವು ಈ ರೀತಿಯಾಗಿ ಗಮನಿಸಲ್ಪಟ್ಟಿದ್ದರಿಂದ ನಾನು ಬಹಳ ಆಭಾರಿಯಾಗಿದ್ದೇನೆ", ಎಂದು ಹೇಳಿದ್ದರು. ಅವರು ನೈಟ್ ಹುಡ್ ಪ್ರಶಸ್ತಿಯನ್ನು ಗಳಿಸಿದ ಪ್ರತಿಕ್ರಿಯೆಯಾಗಿ, ಹಲವಾರು ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳು ಇದನ್ನು ಪ್ರತಿಭಟಿಸಿದವು. ಈ ರಾಷ್ಟ್ರಗಳ ಹಲವಾರು ಸಂಸತ್ತಿನ ಸದಸ್ಯರುಗಳು ಇದನ್ನು ಖಂಡಿಸಿದವು ಮತ್ತು ಇರಾನ್ ಹಾಗೂ ಪಾಕಿಸ್ತಾನ ರಾಷ್ಟ್ರಗಳು ವಿದ್ಯುಕ್ತವಾಗಿ ಪ್ರತಿಭಟಿಸಲು ಬರುವಂತೆ ತಮ್ಮ ಬ್ರಿಟಿಷ್ ರಾಯಭಾರಿಗಳನ್ನು ಆಹ್ವಾನಿಸಿದರು. ಮಾಜಿ ಪ್ರಧಾನ ಮಂತ್ರಿಯಾದ ಬೆನಜೀರ್ ಭುಟ್ಟೋಅವರಿಂದ ಮುಖಭಂಗಕ್ಕೊಳಪಟ್ಟ ಪಾಕಿಸ್ತಾನದ ಧಾರ್ಮಿಕ ವ್ಯವಹಾರದ ಮಂತ್ರಿ ಮುಹಮದ್ ಇಜಾಝ್-ಉಲ್-ಹಕ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ನಾಟಕೀಯವೆಂಬಂತೆ, ಈ ಹಿಂದೆ ರಶ್ದಿಯವರು ತಮ್ಮ ಕಾದಂಬರಿಯಾದ ಶೇಮ್ ನಲ್ಲಿ ಅವರ ತಂದೆಯರಾದ ಝಿಯಾ-ಉಲ್-ಹಕ್‌‌‌ ಮತ್ತು ಝುಲ್ಫೀಕರ್ ಅಲಿ ಭುಟ್ಟೋ ಅವರನ್ನು ಕ್ರಮವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರು. ಪಾಕಿಸ್ತಾನ ಮತ್ತು ಮಲೇಶಿಯಾಗಳಲ್ಲಿ ರಶ್ದಿಯವರ ನೈಟ್ ಹುಡ್ ವಿರುದ್ಧ ಸಾಮೂಹಿಕ ಪ್ರತಿಭಟನೆ ನಡೆಯಿತು. ಹಲವರು ಅವರ ಮರಣದ ಬಗ್ಗೆ ಸಾರ್ವಜನಿಕವಾಗಿ ಹೇಳಿದರು. ಅನೇಕ ಮುಸ್ಲಿಮೇತರರು ರಶ್ದಿಯವರ ನೈಟ್ ಹುಡ್ ಬಗ್ಗೆ ನಿರಾಶರಾದರು ಕಾರಣ ಲೇಖಕರು ಆ ಗೌರವಕ್ಕೆ ಅರ್ಹತೆ ಹೊಂದಿಲ್ಲವೆಂದು ಅವರು ನಂಬಿದ್ದರು. ಅಲ್-ಖೈದಾ ಕೂಡ ರಶ್ದಿಯವರ ಗೌರವವನ್ನು ನಿಂದಿಸಿತು. ಅಲ್-ಖೈದಾ ಪ್ರತಿನಿಧಿ ಅಯ್ ಮನ್ ಅಲ್-ಝವಹಿರಿ ಧ್ವನಿ ಮುದ್ರಣದಲ್ಲಿ ಉಲ್ಲೇಖಿಸುತ್ತಾ ಹೀಗೆ ಹೇಳಿದ್ದರು, ಭಾರತೀಯ ಸಂಜಾತ ರಶ್ದಿಯವರಿಗೆ ಬ್ರಿಟನ್‌ ನೀಡಿದ ಬಿರುದು "ಇಸ್ಲಾಂಗೆ ಸಂದ ಅವಮಾನ" ಮತ್ತು ಇದು "ಒಂದು ಬಹು ನಿಖರವಾದ ಪ್ರತಿಕ್ರಿಯೆಯ" ಯೋಜಯಾಗಿತ್ತು. == ಧಾರ್ಮಿಕ ಮತ್ತು ರಾಜಕೀಯ ನಂಬಿಕೆ == ರಶ್ದಿಯವರು ಶಿಯಾ ಮುಸ್ಲಿಂ ಕುಟುಂಬದಿಂದ ಬಂದವರು ಆದರೆ ತಾವು ಎಂದೂ ಮತೀಯರಲ್ಲವೆಂದು ಅವರು ಹೇಳುವರು. ೧೯೯೦ ರಲ್ಲಿ ರಶ್ದಿಯವರು, "ಫತ್ವಾದಲ್ಲಿ ಇವರನ್ನು ಕೊಲ್ಲುಲು ಹೊಂಚಿಸುತ್ತಿರುವ ಮುಸ್ಲಿಮರ ಭಯವನ್ನು ಕಡಿಮೆಗೊಳಿಸುವ ನಂಬಿಕೆಯಿಂದ" ಒಂದು ಪ್ರಕಟಣೆಯನ್ನು ಹೊರಡಿಸಿದರು, ಅದರಲ್ಲಿ ಅವರು "ತಮ್ಮ ಮುಸ್ಲಿಂ ನಂಬಿಕೆಯನ್ನು ಅವರು ಪುನಶ್ಚೇತನಗೊಳಿಸಿದರು. ತಮ್ಮ ಕಾದಂಬರಿಯಲ್ಲಿ ಇಸ್ಲಾಂ ವಿರುದ್ಧ ಆಕ್ರಮಣ ನಡೆದಿದೆ ಎನ್ನುವುದನ್ನು ತಳ್ಳಿಹಾಕಿದರು ಮತ್ತು ಇಡೀ ಜಗತ್ತಿನಲ್ಲಿ ಧರ್ಮವನ್ನು ಒಳ್ಳೆಯ ರೀತಿಯಲ್ಲಿ ತಿಳಿಯುವಂತೆ ಕೆಲಸ ಮಾಡುವುದಾಗಿ ಭರವಸೆಯಿತ್ತರು", ಎಂದು ಹೇಳಿಕೊಂಡಿದ್ದರು. ಹೇಗಿದ್ದರೂ, ರಶ್ದಿಯವರು ನಂತರದಲ್ಲಿ ತಾವು ಆ ರೀತಿ "ಸೋಗುಹಾಕಿದ್ದಾಗಿ" ಹೇಳಿದ್ದರು. ಇವರ ಪುಸ್ತಕಗಳು ಹೆಚ್ಚಾಗಿ ಸಮಾಜದಲ್ಲಿ ಧರ್ಮದ ಪಾತ್ರದ ಬಗ್ಗೆ ಮತ್ತು ಧಾರ್ಮಿಕತೆಯಲ್ಲಿ ನಂಬಿಕೆ ಇರುವವರ ಹಾಗೂ ನಂಬಿಕೆ ಇಲ್ಲದವರ ಮಧ್ಯದ ಬಿನ್ನಾಭಿಪ್ರಾಯದ ಮೇಲೆ ಬೆಳಕು ಬೀರುವಂತದ್ದಾಗಿರುತ್ತದೆ. ೧೯ ನೇ ಶತಮಾನದ ಕೊನೆಯಲ್ಲಿ ಪ್ರಥಮಾನ್ವೇಷಣೆ ಮಾಡಲ್ಪಟ್ಟ ಉಚ್ಚ ವಿಮರ್ಶೆಯನ್ನು ಬಳಸುವುದರ ಪರ ವಾದಿಸಿದವರಲ್ಲಿ ರಶ್ದಿ ಮೊದಲಿಗರು. ಆಗಸ್ಟ್ ೨೦೦೫ರ ಮಧ್ಯ-ಭಾಗದಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಮತ್ತು ದಿ ಟೈಮ್ಸ್‌ ಪತ್ರಿಕೆಗಳ ಅಥಿತಿ ಅನಿಸಿಕೆ ಅಂಕಣದಲ್ಲಿ ರಶ್ದಿಯವರನ್ನು ಇಸ್ಲಾಂ ಸುಧಾರಕ ಎಂದು ಕರೆಯಲಾಗಿತ್ತು. ಅವರ ಉಪನ್ಯಾಸದ ಆಯ್ದ ಭಾಗಗಳು: , , , , - . (...) , , , . (...) - ; - . ರಶ್ದಿಯವರು 1999 ರಲ್ಲಿ ಯುಗೊಸ್ಲಾವಿಯಾದ ಫೆಡರಲ್ ರಿಪಬ್ಲಿಕ್‌ನ ಬಾಂಬ್ ದಾಳಿಯನ್ನು ಬೆಂಬಲಿಸಿದರು, ತೀವೃವಾದಿ ಮುಖಂಡ ತಾರಿಖ್ ಅಲಿ ಅವರ ಮುಂದಾಳತ್ವದಲ್ಲಿ ರಶ್ದಿ ಮತ್ತು ಹಲವು "ಯೋಧ ಬರಹಗಾರರಿಗೆ" ಕುರಿತು "ದಿ ಬೆಲ್ಲಿಗೆರಾತಿ" ಎಂದು ಹೆಸರಂಟಿಸಿದರು. ಇವರು ೨೦೦೧ರಲ್ಲಿ ಪ್ರಾರಂಭವಾದ,ಅಪಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಉರುಳಿಸುವ ಯು.ಎಸ್ ಚಳುವಳಿಯ ಬೆಂಬಲಿಗರಾಗಿದ್ದರು. ಆದರೆ ೨೦೦೩ ರಲ್ಲಿ ಇವರು ಇರಾಕ್ ಯುದ್ಧದ ವಾಕ್ ವಿಮರ್ಶಕರಾದರು. ಯಾವಾಗ ಅಲ್ಲಿ "ಸದ್ದಾಂ ಹುಸೇನ್ ಅವರನ್ನು ತೆಗೆಯುವ ವಿಷಯ ಬರುತ್ತದೆಯೊ" ಆಗ ಯು.ಎಸ್‌ನ ಏಕಪಕ್ಷೀಯ ಮಿಲಿಟರಿ ಹಸ್ತಕ್ಷೇಪ ಅಸಮರ್ಥನೀಯ ವಾದದ್ದು ಎಂದು ಇವರು ವ್ಯಕ್ತಪಡಿಸಿದ್ದರು. ೨೦೦೬ರ ಮಾರ್ಚ್‌ನಲ್ಲಿನ 'ಡ್ಯಾನಿಶ್ ಕಾರ್ಟೂನ್ಸ್ ಅಫೇರ್‌'ನ ಎಚ್ಚರಿಕೆಯಿಂದ - ೧೯೮೯ ರಲ್ಲಿನ ದಿ ಸ್ಯಾಟನಿಕ್ ವರ್ಸೆಸ್ ಪ್ರಕಟಣೆಯನ್ನು ಅನುಸರಿಸಿದ ಸಾವಿನ ಭೀತಿಯ ಪ್ರತಿಧ್ವನಿ ಮತ್ತು ಫತ್ವಾ ಎಂದು ಕೆಲವರು ಪರಿಗಣಿಸಿದ್ದರು - ಮತೀಯ ಅತಿರೇಕತೆಯ ಅಪಾಯವನ್ನು ಎಚ್ಚರಿಸುವಂತಹ ಹೇಳಿಕೆಯಾದ 'ಎಲ್ಲರೂ ಒಟ್ಟಾಗಿ ಒಂದು ಹೊಸ ಸರ್ವಾಧಿಕಾರಶಾಹಿಯನ್ನು ಎದುರಿಸುವ’ ಎಂಬ ಪ್ರಣಾಳಿಕೆಗೆ ರಶ್ದಿಯವರು ಸಹಿ ಮಾಡಿದ್ದರು. ಈ ಘೋಷಣೆಯು ೨೦೦೬ರ ಮಾರ್ಚ್‌ನಲ್ಲಿ ಫ್ರೆಂಚ್ ವಾರಪತ್ರಿಕೆಯ ಚಾರ್ಲಿ ಹೆಬ್ಡೋದ ಲೆಪ್ಟ್‌ ಲೀನಿಂಗ್‌ನಲ್ಲಿ ಪ್ರಕಟಣೆಗೊಂಡಿತು. ರಶ್ದಿಯವರು ೨೦೦೬ರಲ್ಲಿ, ತಮ್ಮ ಹೇಳಿಕೆಗೆ ನಿಖಾಬ್ ಧರಿಸಲು ವಿರೋಧಿಸಿದ್ದ ಸಂಸತ್ತಿನ ಕೆಳಮನೆಯ ಮುಖಂಡನಾದ ಜ್ಯಾಕ್ ಸ್ಟ್ರಾ (ಕಣ್ಣನ್ನು ಬಿಟ್ಟು ಮುಖದ ಉಳಿದ ಭಾಗವನ್ನು ಮುಚ್ಚುವ ಮುಸುಕು) ಅವರಿಂದ ಬೆಂಬಲ ಪಡೆದುದಾಗಿ ಹೇಳಿದ್ದರು. ರಶ್ದಿಯವರು ತಮ್ಮ ಮೂವರು ಸಹೋದರಿಯರು ಎಂದಿಗೂ ಮುಸುಕು ಧರಿಸುವುದಿಲ್ಲವೆಂದು ಹೇಳಿದ್ದರು. "ನನ್ನ ಅನಿಸಿಕೆಯಲ್ಲಿ, ಸ್ತ್ರೀಯರ ಮಿತಿಗೆ ವಿರುದ್ಧವಾಗಿ ಮುಸುಕು ಧರಿಸುವ ಕದನ ಬಹಳ ಹಿಂದಿನದ್ದು ಮತ್ತು ಮುಂದುವರೆದಂತದ್ದು, ಅದಕ್ಕಾಗಿ ಈ ವಿಚಾರದಲ್ಲಿ ನಾನು ಪೂರ್ತಿಯಾಗಿ(ಸ್ಟ್ರಾ ಅವರ) ಪರವಾಗಿದ್ದೇನೆ." ಎಂದು ಅವರು ಹೇಳಿದ್ದರು. ಅವರ ರಾಜಕೀಯ ಅವಲೋಕನಕ್ಕಾಗಿ ಹೆಚ್ಚಾಗಿ ಬ್ರಿಟಿಷ್ ಶೈಕ್ಷಣಿಕ ಸಂಸ್ಥೆಗಳಿಂದ ವಿಮರ್ಶೆಯನ್ನು ಎದುರಿಸುವುದನ್ನು ಮುಂದುವರೆಸಿದರು. ಹಿಂದೆ ರಶ್ದಿಯವರ ಕೆಲಸದ ಪ್ರಶಂಸಕರಾಗಿದ್ದ ಮಾರ್ಕ್ಸ್‌ ವಾದಿ ವಿಮರ್ಶಕ ಟೆರ್ರಿ ಈಗಲ್ಟನ್, ತನ್ನ ಅಧಿಕಾರದಿಂದ ಅವರ ಮೇಲೆ ಆರೋಪವನ್ನು ಹೋರಿಸುತ್ತಾ "ಇರಾಕ್ ಮತ್ತು ಅಪಘಾನಿಸ್ತಾನದ ಮೇಲೆ ಪೆಂಟಗನ್‌ನ ಪಾತಕ ಸಾಹಸವನ್ನು ಆನಂದಿಸಿದೆ" ಎಂದು ಹೇಳಿದ್ದರು. ಹಾಗಿದ್ದರೂ, ಅವರು ನಂತರದಲ್ಲಿ ರಶ್ದಿಯವರ ಉದ್ದೇಶವನ್ನು ತಪ್ಪಾಗಿ ತಿಳಿದಿದ್ದರಿಂದ ಕ್ಷಮೆಯಾಚಿಸಿದರು. ರಶ್ದಿಯವರು ೯೨ನೇ ಸ್ಟ್ರೀಟ್ ವೈ‌ನಲ್ಲಿ ಕಾಣಿಸಿಕೊಂಡಾಗ, ಕೃತಿಸ್ವಾಮ್ಯ ಕಾನೂನನ್ನು ಮುಕ್ತ ಉಪನ್ಯಾಸಕ್ಕೆ ಅಡಚಣೆ (ಅಥವಾ ವಿರೋಧ) ಎಂದು ಪರಿಗಣಿಸುತ್ತೀರೋ ಎನ್ನುವ ಪ್ರಶ್ನೆಗೆ, ಅದರ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. . ' , [] , naïvely , . [...] . ' ' ' . . ' . == ಗ್ರಂಥಸೂಚಿ == === ಪುಸ್ತಕಗಳು === == ಗ್ರಂಥಸೂಚಿ == === ಪುಸ್ತಕಗಳು === ಗ್ರಿಮಸ್ (೧೯೭೫) ಮಿಡ್‌‌ನೈಟ್ಸ್ ಚಿಲ್ಡ್ರನ್ (೧೯೮೧) ಶೇಮ್ (೧೯೮೩) : (೧೯೮೭) ದಿ ಸ್ಟ್ಯಾನಿಕ್ ವರ್ಸಸ್ (೧೯೮೮) ಹ್ಯಾರೌನ್ ಆ‍ಯ್೦ಡ್ ದಿ ಸೀ ಆಫ್ ಸ್ಟೋರಿಸ್ (೧೯೯೦) ಇಮ್ಯಾಜಿನರಿ ಹೋಮ್‌‌ಲ್ಯಾಂಡ್ಸ್: ಎಸ್ಸೇಸ್‌ ಆ‍ಯ್೦ಡ್ ಕ್ರಿಟಿಸಿಸಂ, ೧೯೮೧ - ೧೯೯೧ (೧೯೯೨) ಹೋಮ್‌ಲೆಸ್ ಬೈ ಚಾಯ್ಸ್ (೧೯೯೨, ಆರ್.ಜಾಬ್ವಾಲ ಮತ್ತು ವಿ.ಎಸ್.ನೈಪಾಲ್ ಜೊತೆಗೂಡಿ ಬರೆದ ಪುಸ್ತಕ) ಈಸ್ಟ್, ವೆಸ್ಟ್ (೧೯೯೪) ದಿ ಮೂರ್ಸ್‌ ಲಾಸ್ಟ್ ಸಿಂಗ್ (೧೯೯೫) ದಿ ಫೈರ್‌ಬರ್ಡ್ಸ್ ನೆಸ್ಟ್ (1997) ದಿ ಗ್ರೌಂಡ್ ಬಿನೀಥ್ ಹರ್ ಫೀಟ್ (೧೯೯೯) ದಿ ಸ್ಕ್ರೀನ್‌‌ಪ್ಲೇ ಆಫ್ ಮಿಡ್‌ನೈಟ್ಸ್ ಚಿಲ್ಡ್ರನ್ (೧೯೯೯) ಫ್ಯುರಿ (೨೦೦೧) : 1992 - 2002 (೨೦೦೨) ಶಾಲೀಮಾರ್ ದಿ ಕ್ಲೌನ್‌ (೨೦೦೫) ದಿ ಎಂಚಾಂಟ್ರೆಸ್ ಆಫ್ ಪ್ಲೋರೆನ್ಸ್ (೨೦೦೮) ದಿ ಬೆಸ್ಟ್ ಅಮೇರಿಕನ್ ಶಾರ್ಟ್ ಸ್ಟೋರೀಸ್ (೨೦೦೮, ಗೆಸ್ಟ್ ಎಡಿಟರ್ ಆಗಿ) "ಇನ್ ದಿ ಸೌಥ್ ." ದಿ ನ್ಯೂ ಯಾರ್ಕರ್ , ೨೦೦೯ರ ಮೇ ೧೮ರಂದು === ಪ್ರಬಂಧಗಳು === "ಎ ಫೈನ್ ಪಿಕ್ಕಲ್ ." ದಿ ಗಾರ್ಡಿಯನ್ , ೨೮ ಫೆಬ್ರವರಿ ೨೦೦೯. "ಇಮ್ಯಾಜಿನ್ ದೆರಿಸ್ ನೋ ಹೆವೆನ್.", ಆ‍ಯ್‌ಮ್ಸ್ಟರ್‌ಡಮ್‌ನ ಯು.ಎನ್ ಪ್ರಾಯೋಜಕತ್ವ ಹೊಂದಿರುವ ಯಿಟ್ಗೆವೆರಿಜ್ ಪೊಡಿಯಂನ ಒಂದು ಇಂಗ್ಲೀಷ್ ಪ್ರಕಟಣೆಯಾದ ದಿ ಸಿಕ್ಸ್ ಬಿಲಿಯನ್ ವರ್ಲ್ಡ್ ಸಿಟಿಜನ್‌ಗಾಗಿ ನೀಡಿದ ಪತ್ರಗಳ ಸಾರಯುಕ್ತ ಕೊಡುಗೆ. ದಿ ಗಾರ್ಡಿಯನ್ , ೧೬ ಅಕ್ಟೋಬರ್ ೧೯೯೯. ಮೋಹನ್‌ದಾಸ್ ಗಾಂಧಿ ಟೈಮ್, ೧೩ಏಪ್ರಿಲ್ ೧೯೯೮. == ಪ್ರಶಸ್ತಿಗಳು == ಅರಿಸ್ಟಿಯೋನ್ ಪ್ರಶಸ್ತಿ (ಯುರೋಪಿಯನ್ ಯೂನಿಯನ್) ಆರ್ಟ್ಸ್ ಕೌನ್ಸಿಲ್‌ ಬರಹಗಾರರ ಪ್ರಶಸ್ತಿ ವರ್ಷದ ಲೇಖಕ (ಬ್ರಿಟಿಷ್ ಪುಸ್ತಕ ಪ್ರಶಸ್ತಿಗಳು) ವರ್ಷದ ಲೇಖಕ (ಜರ್ಮನಿ) ಕಾದಂಬರಿಗಾಗಿ ಬೂಕರ್ ಪ್ರಶಸ್ತಿ ಬೂಕರ್‌ ಪ್ರಶಸ್ತಿಯ ೨೫ನೇ ವಾರ್ಷಿಕೋತ್ಸವದಲ್ಲಿ (೧೯೯೩ರಲ್ಲಿ), ತಮ್ಮ ಕಾದಂಬರಿಗಾಗಿ ಬೂಕರ್‌ ಪ್ರಶಸ್ತಿಯನ್ನು ಗಳಿಸಿದವರ ನಡುವಿನ ಉತ್ತಮ ಕಾದಂಬರಿಗಾಗಿ ಬೂಕರ್‌ ಆಫ್ ಬೂಕರ್ಸ್‌ ಪ್ರಶಸ್ತಿ. ಬೂಕರ್‌‌ ಪ್ರಶಸ್ತಿಯ ೪೦ನೇ ವಾರ್ಷಿಕೋತ್ಸವದ ಸ್ಮಾರಕವಾಗಿ (೨೦೦೮ರಲ್ಲಿ), ಸಾರ್ವಜನಿಕ ಮತದ ಮೂಲಕ ದಿ ಬೆಸ್ಟ್ ಆಫ್ ಬೂಕರ್‌ ಪ್ರಶಸ್ತಿಯನ್ನು ಗಳಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ' (ಫ್ರಾನ್ಸ್) ಇಂಗ್ಲೀಷ್-ಸ್ಫೀಕಿಂಗ್ ಯೂನಿಯನ್ ಅವಾರ್ಡ್ ಹಚ್ ಕ್ರಾಸ್‌ವರ್ಡ್ ಫಿಕ್ಷನ್ ಅವಾರ್ಡ್‌ (ಇಂಡಿಯಾ) ಇಂಡಿಯಾ ಅಬ್ರೋಡ್‌ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್(ಯು.ಎಸ್‌.ಎ) ಜೇಮ್ಸ್ ಟೈಟ್ ಬ್ಲಾಕ್ ಮೆಮೊರಿಯಲ್ ಅವಾರ್ಡ್‌ (ಕಾದಂಬರಿ) ಕರ್ಟ್ ಟುಕೊಲ್ಸ್‌ಕೀ ಪ್ರೈಜ್ (ಸ್ವೀಡನ್) ಮಂಟುವಾ ಪ್ರೈಜ್ (ಇಟಲಿ) ಜೇಮ್ಸ್ ಜಾಯ್ಸ್ ಅವಾರ್ಡ್ - ಯೂನಿವರ್ಸಿಟಿ ಕಾಲೇಜ್ ಡಬ್ಲಿನ್ ಮ್ಯಾಸಚ್ಯುಸೆಟ್ಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಆನರರಿ ಪ್ರೊಫೆಸರ್ಶಿಫ್ ಚಾಪ್‌ಮನ್ ಯೂನಿವರ್ಸಿಟಿ ಆನರರಿ ಡಾಕ್ಟರೇಟ್ - ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್ ಔಟ್‌ಸ್ಟಾಂಡಿಂಗ್ ಲೈಫ್‌ಟೈಮ್ ಅಚೀವ್‍ಮೆಂಟ್ ಇನ್ ಕಲ್ಚರಲ್ ಹ್ಯೂಮನಿಸಂ (ಹಾರ್ವರ್ಡ್‌ ವಿಶ್ವವಿದ್ಯಾಲಯ) ಪ್ರೀಮಿಯೋ ಗ್ರಿನ್‌ಜೇನ್‌ ಕೆವೊರ್(ಇಟಲಿ) ಪ್ರಿಕ್ಸ್ ಕೊಲೆಟ್ (ಸ್ವಿಟ್ಜರ್ಲ್ಯಾಂಡ್) ಪ್ರಿಕ್ಸ್ ಡು ಮೈಲಿಯರ್ ಲೈವ್ರೆ ಎಟ್ರಾಂಗರ್ ಸೆಂಟ್. ಲೂಯಿಸ್ ಲಿಟರರೀ ಅವಾರ್ಡ್ - ಸೆಂಟ್ ಲೂಯಿಸ್ ವಿಶ್ವವಿದ್ಯಾಲಯ ಸ್ಟೇಟ್ ಪ್ರೈಜ್ ಫಾರ್ ಲಿಟ್ರೆಚರ್ (ಆಸ್ಟ್ರೇಲಿಯಾ) ವೈಟ್‌ಬ್ರೆಡ್ ಕಾದಂಬರಿ ಪ್ರಶಸ್ತಿ (ಎರಡುಬಾರಿ) ಮಕ್ಕಳ ಕಾದಂಬರಿಗಾಗಿ ಲೇಖಕರ ಗಿಲ್ಡ್ ಆಫ್ ಗ್ರೇಟ್ ಬ್ರಿಟನ್ ಅವಾರ್ಡ್ == ಇವನ್ನೂ ಗಮನಿಸಿ == ದಿ ಸೆಟಾನಿಕ್ ವರ್ಸೆಸ್ ದಿ ಸೆಟಾನಿಕ್ ವರ್ಸೆಸ್ ವಿವಾದ ನಾರ್ವೆಯ ಲೇಖಕ ಅಕ್ಸೆಲ್ ಜೆನ್‍ಸೆನ್ ಮತ್ತು ಅವರ ಪ್ರಬಂಧಗಳ ಸಂಗ್ರಹ, ಗಾಡ್ ಡಸ್ ನಾಟ್ ರೀಡ್ ನಾವೆಲ್ಸ್: ಎ ವೊಯೇಜ್ ಇನ್ ದಿ ವಲ್ಡ ಆಫ್ ಸಲ್ಮಾನ್ ರಶ್ದಿ (೧೯೯೪), ಇನ್ ಡಿಫೇನ್ಸ್ ಆಫ್ ಪ್ರೀ ಸ್ಪೀಚ್ ಸೌತ್ ಎಷ್ಯಾದಲ್ಲಿ ಸೆನ್ಸಾರ್‌ಶಿಪ್ ಇಂಟರ್‌ನ್ಯಾಷನಲ್ ಜೈಲಾಂಡ್ಸ್-ಪೊಸ್ಟನ್ ಮೊಹಮ್ಮದ್‌ರ ವ್ಯಂಗ್ಯ ಚಿತ್ರದ ವಿವಾದಕ್ಕೆ ಸಂಬಂಧಪಟ್ಟಂತೆ ಇವರು ಕೂಡ ಮುಕ್ತ ಪತ್ರಕ್ಕೆ ಸಹಿ ಹಾಕಿದರು : ಬ್ಲಿಟ್‌ಕಾನ್, ಬ್ರಿಟೀಷ್ ಸಾಹಿತ್ಯದ ವಿವಾದಗಳು ಸಲ್ಮಾನ್ ರಶ್ದಿಯ ಮಿಡ್‌ನೈಟ್ಸ್‌ ಚಿಲ್ಡ್ರನ್ ಕುರಿತಂತ ವಿಮರ್ಶಾತ್ಮಕ ಅಧ್ಯಯನಗಳು ಇಂಡಿಯನ್ ಲಿಟರೇಚರ್‌: ಎ ಕ್ರಿಟಿಕಲ್ ಕೇಸ್‌ಬುಕ್ ನಲ್ಲಿ == ಆಕರಗಳು == == ಹೊರಗಿನ ಕೊಂಡಿಗಳು == ಸಲ್ಮಾನ್ ರಶ್ದಿಯ ಅಧಿಕೃತ ಜಾಲತಾಣ ಸಲ್ಮಾನ್ ರಶ್ದಿ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ ಕಂಟೆಂಪರರಿ ರೈಟರ್ಸ: ಸಲ್ಮಾನ್ ರಶ್ದಿ 2007-05-01 ವೇಬ್ಯಾಕ್ ಮೆಷಿನ್ ನಲ್ಲಿ.. ಬ್ರಿಟೀಷ್ ಕೌನ್ಸಿಲ್: ಆರ್ಟ್ಸ್. ೬ ಡಿಸೆಂಬರ್‌ ೨೦೦೮ರಂದು ಪರಿಷ್ಕರಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್ ಸ್ಪೇಷಲ್ ಫೀಚರ್ ಆನ್ ರಶ್ದಿ, 1999